ಭೋರ್ ಎಂದು ಮಳೆ ಸುರಿಯುತ್ತಿತ್ತು. ಎಲೆ ಎಲೆಯು ಮಳೆಹನಿಯ ಉದಿರಿಸಿ ಮಳೆಹನಿಯೊಂದಿಗೆ ತಾಳ ಹಾಕುತ್ತಿತ್ತು. ವೃಕ್ಷದ ಕೆಳಗೆ ಇದ್ದ ಬುದ್ಧನ ವಿಗ್ರಹ ಮರದ ಬುಡದಲ್ಲಿ ನೆನೆಯದೇ ಧ್ಯಾನಾವಸ್ಥೆಯಲ್ಲಿ ಸ್ಥಿತಪ್ರಜ್ಞವಾಗಿತ್ತು. ಮಳೆಯ ಬಡಿತ ತಾಳಲಾರದೆ ಆಶ್ರಯ ಹುಡುಕಿ ಬಂದ ಒಂದು ಜೀರುಂಡೆ ವಿಗ್ರಹದ ಕೊಂಕುಳಲ್ಲಿ ಆಶ್ರಯ ಪಡೆಯಿತು. ಆಶ್ರಯವಿತ್ತ ಬುದ್ಧನಿಗೆ ಭಕ್ತಿಯಿಂದ ಜೀ ಎಂದು ಶೃತಿಯಲ್ಲಿ ಹಾಡಿ ಕೃತಜ್ಞತೆ ಸಲ್ಲಿಸಿತ್ತು. ಒದ್ದೆ ರೆಕ್ಕೆ ಒದರುತ್ತಾ ಬಂದ ಹಕ್ಕಿ ಬುದ್ಧನ ಒಂದು ಭುಜದ ಮೇಲೆ ಆಸೀನವಾಗಿ ಚಿಲಿಪಿಲಿಗುಟ್ಟಿ ಧನ್ಯತೆಯ ತೋರಿತು. ಮಳೆಯಲ್ಲಿ ತೊಯ್ದು ಬಂದ ಮನುಷ್ಯ ನೋರ್ವ ಹಕ್ಕಿಯನ್ನು ಓಡಿಸಿ, ಜೀರುಂಡೆಯನ್ನು ಒದರಿ ಬುದ್ಧನ ಬೆನ್ನಿಗೆ ಆತು ನಿಂತ. ಸ್ವಾರ್ಥಿ ಮಾನವನನ್ನು ನೋಡಿ ಧ್ಯಾನಸ್ಥಿತ ಬುದ್ಧ ಮುಗುಳು ನಗುತ್ತಲೇ ಇದ್ದ.
*****
Related Post
ಸಣ್ಣ ಕತೆ
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…